Tuesday 21 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 25: 72-81

 

ತತಃ ಪರೇದ್ಯುಃ ಪುನರೇವ ಭೀಮಭೀಷ್ಮೌ ಪುರಸ್ಕೃತ್ಯ ಸಮೀಯತುಸ್ತೇ ।

ಸೇನೇ ತದಾ ಸಾರಥಿಹೀನಮಾಶು ಭೀಷ್ಮಂ ಕೃತ್ವಾ ಮಾರುತಿರಭ್ಯಗಾತ್ ಪರಾನ್ ॥ ೨೫.೭೨॥

 

ಮರುದಿನ ಮತ್ತೆ ಭೀಮ ಭೀಷ್ಮರನ್ನು ಮುಂದಿಟ್ಟುಕೊಂಡು ಪಾಂಡವ ಕೌರವರ ಯುದ್ಧ,

ಆಗ ಭೀಮಸೇನ ಕೂಡಲೇ ಭೀಷ್ಮರನ್ನು ರಥಹೀನ ಮಾಡಿ ಶತ್ರುಗಳನ್ನು ಎದುರಿಸಿದ.

 

ನಿಪಾತಿತಾಸ್ತೇನ ರಥೇಭವಾಜಿನಃ ಪ್ರದುದ್ರುವುಶ್ಚಾವಶಿಷ್ಟಾಃ ಸಮಸ್ತಾಃ ।

ದುರ್ಯ್ಯೋಧನಾದ್ಯೇಷು ಪರಾಜಿತೇಷು ಭೀಷ್ಮದ್ರೋಣದ್ರೌಣಿಪುರಸ್ಸರೇಷು ॥ ೨೫.೭೩॥

 

ರಥ, ಆನೆ, ಕುದುರೆಗಳು, ಅವುಗಳಲ್ಲಿರುವ ವೀರರು,

ಎಲ್ಲರೂ ಭೀಮಸೇನನಿಂದ ಕೆಡವಲ್ಪಟ್ಟು ಹತರಾದರು.

ಸೋಲುತ್ತಿದ್ದಾಗ ಭೀಷ್ಮ ದ್ರೋಣ ಅಶ್ವತ್ಥಾಮ ದುರ್ಯೋಧನ,

ಮಾಡಿದರು ಉಳಿದವರೆಲ್ಲಾ ರಣರಂಗದಿಂದ ಪಲಾಯನ.

 

ಮಹಾಗಜಸ್ಥೋ ಭಗದತ್ತ ಆಗಾದಾಯನ್ ಬಾಣಂ ಭೀಮಸೇನೇSಮುಚಚ್ಚ ।

ತೇನಾತಿವಿದ್ಧೇ ಭೀಮಸೇನೇSಸ್ಯ ಪುತ್ರ ಉದ್ಯಚ್ಛಮಾನಂ ಪಿತರಂ ನಿವಾರ್ಯ್ಯ ॥ ೨೫.೭೪॥

 

ಘಟೋತ್ಕಚೋSಭ್ಯದ್ರವದಾಶು ವೀರಃ ಸ್ವಮಾಯಯಾ ಹಸ್ತಿಚತುಷ್ಟಯಸ್ಥಃ ।

ಸ ವೈಷ್ಣವಾಸ್ತ್ರಂ ಭಗದತ್ತಸಂಸ್ಥಂ ವಿಜ್ಞಾಯ ವಿಷ್ಣೋರ್ವರತೋ ವಿಶೇಷತಃ ॥ ೨೫.೭೫॥

 

ಅಮೋಘಮನ್ಯತ್ರ ಹರೇರ್ಮ್ಮರುತ್ಸುತಃ ಪುತ್ರೇ ಯಾತೇ ನ ಸ್ವಯಮಭ್ಯಧಾವತ್ ।

ಅನುಗ್ರಹಾದಭ್ಯಧಿಕಾದವದ್ಧ್ಯಂ ಜಾನನ್ನಪಿ ಸ್ವಂ ವಾಸುದೇವಸ್ಯ ನಿತ್ಯಮ್  ॥ ೨೫.೭೬॥

 

ತದ್ಭಕ್ತಿವೈಶೇಷ್ಯತ ಏವ ತಸ್ಯ ಸತ್ಯಂ ವಾಕ್ಯಂ ಕರ್ತ್ತುಮರಿಂ ನಚಾಯಾತ್ ।

ಯದಾ ಸ್ವಪುತ್ರೇಣ ಜಿತೋ ಭವೇತ್ ಸ ಕಿಮ್ವಾತ್ಮನೇತ್ಯೇವ ತದಾ ಪ್ರವೇತ್ತುಮ್ ॥ ೨೫.೭೭॥

 

ಆಗ ಮಹಾಗಜವನ್ನೇರಿದ್ದ ಭಗದತ್ತ ಬಂದ,

ಬರುತ್ತಲೇ ಭೀಮನ ಮೇಲೆ ಬಾಣಗಳನ್ನೆಸೆದ.

ಭಗದತ್ತನಿಂದ ಭೀಮ ಉಗ್ರವಾಗಿ ಹೊಡೆಸಿಕೊಂಡ,

ಭೀಮಪುತ್ರ ಘಟೋತ್ಕಚ ಭಗದತ್ತನ ಮೇಲೇರಿ ಬಂದ.

ತಂದೆಯ ತಡೆದ ಘಟೋತ್ಕಚನು , ತನ್ನ ಮಾಯೆಯಿಂದ,

ನಾಕು ರೂಪ ಧರಿಸಿ ನಾಕು ಆನೆಗಳೇರಿ ಅವನಿಗೆದುರಾದ.

ಭೀಮಗೆ ಗೊತ್ತಿತ್ತು ಭಗದತ್ತನಲ್ಲಿದ್ದ ನಾರಾಯಣಾಸ್ತ್ರದ ಹಿರಿಮೆ,

ಅವಧ್ಯನಾಗಿದ್ದರೂ, ಲೋಕಕೆ ತೋರಿದ ಹರಿಚಿತ್ತದ ಮಹಿಮೆ.

ಒಂದುವೇಳೆ ಘಟೋತ್ಕಚನಿಂದ ಸೋತುಹೋದರೆ ಭಗದತ್ತ,

ಆಗವನು ತನ್ನಿಂದಲೂ ಸೋಲುವನೆಂಬುದು ಕೈಮುತ್ಯ ಸತ್ಯ.

 

ಸ ವಿಸ್ಮೃತಾಸ್ತ್ರಸ್ತು ಯದಾ ಭವೇತ ತದಾ ಭೀಮೋ ಭಗದತ್ತಂ ಪ್ರಯಾತಿ ।

ಋತೇ ಭೀಮಂ ವಾSರ್ಜ್ಜುನಂ ನಾಸ್ತ್ರಮೇಷ ಪ್ರಮುಞ್ಚತೀತ್ಯೇವ ಹಿ ವೇದ ಭೀಮಃ ॥ ೨೫.೭೮॥

 

ಭಗದತ್ತ ಯಾವ್ಯಾವಾಗ ಅಸ್ತ್ರಮಂತ್ರ ಮರೆಯುತ್ತಿದ್ದ,

ಭೀಮಸೇನ ಭಗದತ್ತನ ಮೇಲೆ ಯುದ್ಧ ಮಾಡುತ್ತಿದ್ದ.

ಭೀಮಗರಿವಿತ್ತು: ಭೀಮ ಮತ್ತು ಅರ್ಜುನ (ತಮ್ಮಿಬ್ಬರನ್ನು) ಬಿಟ್ಟು,

ಉಳಿದವರ ಮೇಲೆ ವೈರಿ ವೈಷ್ಣವಾಸ್ತ್ರ ಬಿಡಲ್ಲ ಎಂಬುವ ಗುಟ್ಟು.

 

ಚತುರ್ಗ್ಗಜಾತ್ಮೋಪರಿಗಾತ್ಮಕಶ್ಚ ಘಟೋತ್ಕಚಃ ಸುಪ್ರತೀಕಂ ಚ ತಂ ಚ ।

ನಾನಾಪ್ರಹಾರೈರ್ವಿತುದಂಶ್ಚಕಾರ ಸನ್ದಿಗ್ಧಜೀವೌ ಜಗತಾಂ ಸಮಕ್ಷಮ್ ॥ ೨೫.೭೯॥

 

ಘಟೋತ್ಕಚ ನಾಕು ಆನೆಗಳ ಮೇಲೆ ನಾಕು ರೂಪಗಳಿಂದ,

ಸುಪ್ರತೀಕ ಆನೆ ಮತ್ತು ಭಗದತ್ತರನ್ನು ಬಹಳವಾಗಿ ಪೀಡಿಸಿದ.

ನೋಡಲವರು ಬದುಕಿದ್ದಾರೋ ಇಲ್ಲವೋ ಎಂಬಂತೆ ಮಾಡಿದ.

 

 

ಗಜಾರ್ತ್ತನಾದಂ ತು ನಿಶಮ್ಯ ಭೀಷ್ಮಮುಖಾಃ ಸಮಾಪೇತುರಮುಂ ಚ ದೃಷ್ಟ್ವಾ ।

ಮಹಾಕಾಯಂ ಭೀಮಮಮುಷ್ಯ ಪೃಷ್ಠಗೋಪಂ ಚ ವಾಯ್ವಾತ್ಮಜಮತ್ರಸನ್ ಭೃಶಮ್  ॥ ೨೫.೮೦॥

 

ಸುಪ್ರತೀಕ ಆನೆಯ ಆರ್ತನಾದವದು ಕೇಳಿ ಬಂದಾಗ,

ಭೀಷ್ಮಾದಿಗಳು ಧಾವಿಸುತ್ತಾರೆ ಭಗದತ್ತನ ರಕ್ಷಣೆಗಾಗ.

ಮಹಾಕಾಯನಾದ ಘಟೋತ್ಕಚ, ಮತ್ತೆ ಬೆಂಬಲಕ್ಕೆ ನಿಂತ ತಂದೆ,

ಇಬ್ಬರನ್ನೂ ಕಂಡವರು ನಡುಗಿಹೋದರು ಅತೀವವಾದ ಭಯದಿಂದೆ.

 

ತೇ ಭೀತಭೀತಾಃ ಪೃತನಾಪಹಾರಂ ಕೃತ್ವಾSಪಜಗ್ಮುಃ ಶಿಬಿರಾಯ ಶೀಘ್ರಮ್ ।

ದಿನೇ ಪರೇ ಚೈವ ಪುನಃ ಸಮೇತಾಃ ಪರಸ್ಪರಂ ಪಾಣ್ಡವಕೌರವಾಸ್ತೇ ॥ ೨೫.೮೧॥

 

ಭಯಗ್ರಸ್ತ ಭೀಷ್ಮಾದಿಗಳೆಲ್ಲಾ ಶಿಬಿರಕ್ಕೆ ಹೊರಟು ಹೋದರು,

ಮರುದಿನ ಮತ್ತೆ ಯುದ್ಧಕ್ಕೆ ಪಾಂಡವ ಕೌರವರು ಸೇರಿದರು.

No comments:

Post a Comment

ಗೋ-ಕುಲ Go-Kula