Thursday 5 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 221-226

 

ಅರ್ಜ್ಜುನಃ ಕಪಿವರೋಚ್ಛ್ರಿತದ್ಧ್ವಜಂ ಸ್ಯನ್ದನಂ ಸಮಧಿರುಹ್ಯ ಗಾಣ್ಡಿವೀ ।

ಯಾತ ಏವ ದಿಶಮುತ್ತರಾಂ ಯದಾ ಪಾರ್ವತೀಯಕನೃಪಾಃ ಸಮಾಯಯುಃ             ॥೨೧.೨೨೧॥

ಗಾಂಡೀವಧಾರಿಯಾದ ಅರ್ಜುನ,

ಏರಿದ ರಥದಲ್ಲಿತ್ತು ಹನುಮ ಲಾಂಛನ.

ಅವನು ದಿಗ್ವಿಜಯಕ್ಕೆ ಉತ್ತರದಿಕ್ಕಿಗೆ ತೆರಳಿದಾಗ,

ಯುದ್ಧಕೆ ಬಂದರು ಪರ್ವತವಾಸಿ ಕ್ಷುದ್ರರಾಜರಾಗ.

 

ತ್ರೈಗರ್ತ್ತಾಃ ಪಾರ್ವತೇಯಾಶ್ಚ ಸಹಿತಾಃ ಪಾಣ್ಡುನನ್ದನಮ್ ।

ಅಭ್ಯೇತ್ಯ ಯೋಧಯಾಮಾಸುರ್ಜ್ಜಾನನ್ತಸ್ತಚ್ಚಿಕೀರ್ಷಿತಮ್             ॥೨೧.೨೨೨॥

ತ್ರಿಗರ್ತದೇಶದವರು, ಪಾರ್ವತೇಯರು,

ಎಲ್ಲಾ ಸೇರಿ ಅರ್ಜುನಗೆ ಎದುರಾದರು.

ಅವನುದ್ದೇಶ ತಿಳಿದು ಯುದ್ಧ ಮಾಡಿದರು.

 

ತಾನ್ ವಿಜಿತ್ಯ ಯುಗಪತ್ ಸ ಪಾಣ್ಡವಃ ಸಞ್ಜಯನ್ ಕ್ರಮಶ ಏವ ತಾಂ ದಿಶಮ್ ।

ಪ್ರಾವ್ರಜಚ್ಚ ಭಗದತ್ತಮೂರ್ಜ್ಜಿತಂ ತೇನ ಚಾಸ್ಯ ಸಮಭೂನ್ಮಹಾರಣಃ        ॥೨೧.೨೨೩॥

ಅವರೆಲ್ಲರನ್ನೂ ಒಮ್ಮೆಲೇ ಗೆದ್ದುಬಿಟ್ಟ ಅರ್ಜುನ,

ಉತ್ತರದಿಕ್ಕು ಗೆದ್ದು ಅರಸಿ ಹೊರಟ ಭಗದತ್ತನನ್ನ.

ಬಲಿಷ್ಠ ಭಗದತ್ತನೊಡನೆ ನಡೆಯಿತು ಭಾರೀಕದನ.

 

ಸೋSಭಿಯುದ್ಧ್ಯ ಸಗಜೋ ದಿನಾಷ್ಟಕಂ ಶ್ರಾನ್ತ ಆಹ ಪುರುಹೂತನನ್ದನಮ್ ।

ಬ್ರೂಹಿ ತೇ ಸಮರಕಾರಣಂ ತ್ವಿತಿ ಪ್ರಾಹ ದೇಹಿ ಕರಮಿತ್ಯಥಾರ್ಜ್ಜುನಃ             ॥೨೧.೨೨೪॥

 

ಸೋsಪ್ಯದಾತ್ ಕರಮಮುಷ್ಯ ವಾಸವೋ ಮದ್ಗುರುಸ್ತವ ಪಿತೇತಿ ಸಾದರಮ್ ।

ನೈವ ಜೇತುಮಿಹ ಶಕ್ಷ್ಯಸಿ ತ್ವಮಿತ್ಯಾವದದ್ಧರಿವರಾಸ್ತ್ರತೇಜಸಾ             ॥೨೧.೨೨೫॥

ಅರ್ಜುನ ಬಂದಿರುವ ಕಾರಣ ತಿಳಿದುಕೊಳ್ಳದ ಭಗದತ್ತ,

ಸುಪ್ರತೀಕ ಆನೆಯನೇರಿ ಕಾದಿದ ಎಂಟುದಿನ ಸತತ.

ಆಯಾಸಗೊಂಡು ಕೇಳಿದ -ನಿನ್ನ ಯುದ್ಧಕೆ ಕಾರಣವೇನು,

ಅರ್ಜುನನೆಂದ -ನಮ್ಮ ಯಜ್ಞಕ್ಕೆ ಕಪ್ಪ ಕೊಡಬೇಕು ನೀನು.

ಭಗದತ್ತ ಅರ್ಜುನನಿಗೆ ಕಪ್ಪವನ್ನೇನೋ ನೀಡಿದ,

ನಿನ್ನಪ್ಪ ಇಂದ್ರನೆನ್ನ ಗುರು, ಅದಕ್ಕೆ ಕೊಟ್ಟೆನೆಂದ.

ನೀನು ನನ್ನನ್ನ ಗೆಲ್ಲಲಾರೆ ಎಂದೂ ಹೇಳಿದ,

ಅದು ತನ್ನಲ್ಲಿದ್ದ ನಾರಾಯಣಾಸ್ತ್ರ ಬಲದಿಂದ.

 

[ಭಗದತ್ತ ಇಂದ್ರನ ಶಿಷ್ಯ, ನರಕಾಸುರನ ಮಗ, ಪಾಂಡುವಿನ ಗೆಳೆಯ. ವರಾಹ ದೇವರ ವಿಶೇಷ ಅನುಗ್ರಹ ಅವನಮೇಲಿತ್ತು.]

ಸ್ನೇಹಪೂರ್ವಂ ಪ್ರದತ್ತೇ ತು ಕರೇ ನೈವಾsಹ ಚೋತ್ತರಮ್ ।

ಅರ್ಜ್ಜುನೋ ವ್ಯರ್ತ್ಥಕಲಹಮನಿಚ್ಛನ್ ಸ್ನೇಹಯನ್ತ್ರಿತಃ                  ॥೨೧.೨೨೬॥

ಗೆಳೆತನದಿಂದ ಕಪ್ಪವನ್ನು ಕೊಟ್ಟಿದ್ದ ಭಗದತ್ತ,

ಅರ್ಜುನಗನಿಸಿತು ಕಲಹ ಮಾಡುವುದು ವ್ಯರ್ಥ.

ಯಾವ ಪ್ರತ್ಯುತ್ತರವ ಕೊಡಲಿಲ್ಲ ಗೌರವಾರ್ಥ.


 [Contributed by Shri Govind Magal]

No comments:

Post a Comment

ಗೋ-ಕುಲ Go-Kula