Saturday 14 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 54-59

 

ಪಾಣ್ಡವಾನಾಂ ಚ ಯಾ ಭಾರ್ಯ್ಯಾಃ ಪುತ್ರಾ ಅಪಿ ಹಿ ಸರ್ವಶಃ ।

ಅನ್ವೇವ ಪಾಣ್ಡವಾನ್ ಯಾತಾ ವನಮತ್ರೈವ ಚ ಸ್ಥಿತಾಃ ॥೨೨.೫೪॥

ಪಾಂಡವರ ಬೇರೆ ಬೇರೆ ಹೆಂಡಂದಿರು ಮತ್ತವರ ಮಕ್ಕಳೆಲ್ಲಾ,

ಅವರನ್ನನುಸರಿಸಿ ಕಾಡಿಗೆ ಹೋಗಿ ಅವರೊಂದಿಗೆ ಇದ್ದರೆಲ್ಲಾ.

 

ಧೃಷ್ಟದ್ಯುಮ್ನಸ್ತತಃ ಕೃಷ್ಣಾಂ ಸಾನ್ತ್ವಯಿತ್ತ್ವೈವ ಕೇಶವಮ್ ।

ಪ್ರಣಮ್ಯ ಸಮನುಜ್ಞಾತೋ ಭಾಗಿನೇಯೈಃ ಪುರಂ ಯಯೌ         ॥೨೨.೫೫॥

ಧೃಷ್ಟದ್ಯುಮ್ನ ತಂಗಿ ದ್ರೌಪದಿಯ ಸಂತೈಸಿದ,

ಕೃಷ್ಣಗೆ ನಮಸ್ಕರಿಸಿ ಅವನನುಜ್ಞೆಯ ಪಡೆದ.

ದ್ರೌಪದೀಪುತ್ರರಾದ ತನ್ನ ಅಳಿಯರೊಂದಿಗೆ,

ತೆರಳಿದ ತನ್ನ ಪಟ್ಟಣವಾದ ಪಾಂಚಾಲದೆಡೆಗೆ.

 

ಧೃಷ್ಟಕೇತುಶ್ಚ ಭಗಿನೀಂ ಕಾಶಿರಾಜಃ ಸುತಾಮಪಿ ।

ಪುರಂ ಯಯತುರಾದಾಯ ಕುನ್ತ್ಯೈವಾನ್ಯಾಃ ಸಹ ಸ್ಥಿತಾಃ           ॥೨೨.೫೬॥

ಅಣ್ಣ ಧೃಷ್ಟಕೇತು ಧರ್ಮರಾಜ ಪತ್ನಿಯಾದ ದೇವಕಿಯನ್ನು,

ಕಾಶಿರಾಜ ತನ್ನ ಮಗಳು ಭೀಮನ ಪತ್ನಿಯಾದ ಕಾಳಿಯನ್ನು,

ತಮ್ಮ ತಮ್ಮ ಪಟ್ಟಣಗಳಿಗೆ ಕರೆದೊಯ್ದರು,

ಮಿಕ್ಕವರು ಕುಂತಿಯೊಂದಿಗೆ ವಿದುರನಲ್ಲಿದ್ದರು.

 

ಪಾರ್ವತೀ ನಕುಲಸ್ಯಾSಸೀದ್ ಭಾರ್ಯ್ಯಾ ಪೂರ್ವಂ ತಿಲೋತ್ತಮಾ ।

ಪೂರ್ವೋಕ್ತೇ ಚೈವ ಯಮಯೋರ್ಭಾರ್ಯ್ಯೇ ಕುನ್ತ್ಯಾ ಹಿ ವಾರಿತಾಃ ॥೨೨.೫೭॥

ತಿಲೋತ್ತಮೆ ಎಂಬ ಅಪ್ಸರೆ ನಕುಲನ ಹೆಂಡತಿಯಾಗಿ ಬಂದವಳ ಹೆಸರು ಪಾರ್ವತಿ,

ಅವಳನ್ನೂ, ನಕುಲ ಸಹದೇವರ ಪತ್ನಿಯರನ್ನೂ ತಡೆದಿಟ್ಟುಕೊಂಡಿದ್ದಳು ಕುಂತಿ.

(ಶಲ್ಯ ಜರಾಸಂಧ ಪುತ್ರಿಯರು ನಕುಲ ಸಹದೇವರ ಪತ್ನಿಯರೆಂಬುದು ಸಂಗತಿ.)

 

ಸುಭದ್ರಾಮಭಿಮನ್ಯುಂ ಚ ರಥಮಾರೋಪ್ಯ ಕೇಶವಃ ।

ಪಾಣ್ಡವಾನಭ್ಯನುಜ್ಞಾಯ ಸಭಾರ್ಯ್ಯಃ ಸ್ವಪುರಿಂ ಯಯೌ ॥೨೨.೫೮॥

ಸುಭದ್ರೆ ಅಭಿಮನ್ಯು ಅವರುಗಳನ್ನು ಕೃಷ್ಣ ರಥವನ್ನೇರಿಸಿಕೊಂಡ,

ಪಾಂಡವರಿಂದ ಬೀಳ್ಕೊಂಡು ದ್ವಾರಕೆಗೆ ಹೊರಟ ಭಾಮೆಯ ಸಂಗಡ.

 

ಕಞ್ಚಿತ್ ಕಾಲಂ ದ್ರೌಪದೇಯಾ ಉಷ್ಯ ಪಾಞ್ಚಾಲಕೇ ಪುರೇ ।

ಯಯುರ್ದ್ದ್ವಾರಾವತೀ ಮೇವ ತತ್ರೋಷುಃ ಕೃಷ್ಣಲಾಳಿತಾಃ ॥೨೨.೫೯॥

ದ್ರೌಪದಿಯ ಮಕ್ಕಳು ಪಾಂಚಾಲದಲ್ಲಿದ್ದರು ಕೆಲ ಕಾಲ ತಾತನೊಂದಿಗೆ,

ನಂತರದಲ್ಲಿ ಕೃಷ್ಣಪೋಷಿತರಾದರವರು ತೆರಳಿ ಪಟ್ಟಣ ದ್ವಾರಕೆಗೆ.

 [Contributed by Shri Govind Magal]

No comments:

Post a Comment

ಗೋ-ಕುಲ Go-Kula