Wednesday 18 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 75-82

 

ಇತೀರಿತೋ ಧರ್ಮ್ಮಜಃ ಕೃಷ್ಣಯೈವ ನಿರುತ್ತರತ್ವಂ ಗಮಿತಸ್ತ್ವಭತ್ಸಯತ್ ।

ಕುತರ್ಕ್ಕಮಾಶ್ರಿತ್ಯ ಹರೇರಪಿ ತ್ವಮಸ್ವಾತನ್ತ್ರ್ಯಂ ಸಾಧಯಸೀತಿ ಚೋಕ್ತ್ವಾ ॥೨೨.೭೫॥

 

ಈ ರೀತಿ ದ್ರೌಪದಿ ಹೇಳಿದಾಗ ನಿರುತ್ತರನಾದ ಧರ್ಮರಾಯ ಹೇಳುವ,

ನಾರಾಯಣಗೂ ಅಸ್ವಾತಂತ್ರ್ಯ ಹೇಳುತ್ತಿರುವಿ ಹೊಂದಿ ಕುತರ್ಕದಾಶ್ರಯ,

ಉತ್ತರಿಸಲಾಗದ ಧರ್ಮರಾಯ ದ್ರೌಪದಿಯನ್ನು ಬೈದು ಸುಮ್ಮನಾಗುವ.

 

ಛಲೇನ ತೇನ ಪ್ರತಿಭತ್ಸಿತಾ ಸಾ ಕ್ಷಮಾಪಯಾಮಾಸ ನೃಪಂ ಯತಃ ಸ್ತ್ರೀ ।

ವಾಚಾಳತಾ ನಾತಿತರಾಂ ಹಿ ಶೋಭತೇ ಸ್ತ್ರೀಣಾಂ ತತಃ ಪ್ರಾಹ ವೃಕೋದರಸ್ತಮ್ ॥೨೨.೭೬॥

ಧರ್ಮರಾಜ ದ್ರೌಪದಿಯ ಬೈಯ್ಯುತ್ತಾನೆ ಕುತರ್ಕ ಬಲದಿಂದ,

ದ್ರೌಪದಿ ಕ್ಷಮೆ ಬೇಡುತ್ತಾಳೆ :ಸ್ತ್ರೀ ಆದರ್ಶವಾದ ತಾಳ್ಮೆಯಿಂದ.

ಏಕೆಂದರೆ ಶೋಭಿಸದು ಹೆಂಗಸರಿಗೆ ವಾಚಾಳತನ,

ಧರ್ಮರಾಜನ ಮಾತನಾಡಿಸುತ್ತಾನೆ ಭೀಮಸೇನ.

 

ರಾಜನ್ ವಿಷ್ಣುಃ ಸರ್ವಕರ್ತ್ತಾ ನಚಾನ್ಯಸ್ತತ್ತನ್ತ್ರಮೇವಾನ್ಯದಸೌ ಸ್ವತನ್ತ್ರಃ ।

ತಥಾsಪಿ ಪುಂಸಾ ವಿಹಿತಂ ಸ್ವಕರ್ಮ್ಮ ಕಾರ್ಯ್ಯಂ ತ್ಯಾಜ್ಯಂ ಚಾನ್ಯದತ್ಯನ್ತಯತ್ನಾತ್ ॥೨೨.೭೭॥

ಧರ್ಮರಾಜನೇ, ನಾರಾಯಣನೇ ಸರ್ವಕರ್ತ,

ಬೇರ್ಯಾವ ಜೀವನೂ ಸರ್ವಕರ್ತನಲ್ಲ:ಸತ್ಯ.

ಅವನಿಗಿಂತ ಬೇರೆಯಾದುದೆಲ್ಲಾ ಅವನಧೀನ,

ತನ್ನಧೀನದಲ್ಲೇ ತಾನಿದ್ದಾನೆ ಅವ ನಾರಾಯಣ.

ಜೀವ ವಿಹಿತ ಸ್ವಕರ್ಮಗಳ ಮಾಡಲೇಬೇಕು,

ಅವಿಹಿತ ಕುಕರ್ಮಗಳನ್ನು ಬಿಡಲೇಬೇಕು.

 

ಪ್ರತ್ಯಕ್ಷಮೇತತ್ ಪುರುಷಸ್ಯ ಕರ್ಮ್ಮ ತೇನಾನುಮೇಯಾ ಪ್ರೇರಣಾ ಕೇಶವಸ್ಯ ।

ಸ್ವಕರ್ಮ್ಮ ಕೃತ್ವಾ ವಿಹಿತಂ ಹಿ ವಿಷ್ಣುನಾ ತತ್ಪ್ರೇರಣೇತ್ಯೇವ ಬುಧೋSನುಮನ್ಯತೇ ॥೨೨.೭೮॥

ಜೀವ ಮಾಡುವ ಕರ್ಮವು ಪ್ರತ್ಯಕ್ಷ ಸಿದ್ಧ,

ಅದರನುಭವಕ್ಕೂ ಜೀವನಾಗುತ್ತಾನೆ ಬದ್ಧ.

ಅರಿತ ಜೀವಕ್ಕೆ ಅದು ನಾರಾಯಣನ ಪ್ರೇರಣೆ,

ಜ್ಞಾನಿಗದು ದೈವ ಕೊಟ್ಟ ಸದವಕಾಶದ ಕರುಣೆ.

 

ತೇನೈತಿ ಸಮ್ಯಗ್ಗತಿಮಸ್ಯ ವಿಷ್ಣೋರ್ಜ್ಜನೋSಶುಭೋ ದೈವಮಿತ್ಯೇವ ಮತ್ವಾ ।

ಹಿತ್ವಾ ಸ್ವಕಂ ಕರ್ಮ್ಮ ಗತಿಂ ಚ ತಾಮಸೀಂ ಪ್ರಯಾತಿ ತಸ್ಮಾತ್ ಕಾರ್ಯ್ಯಮೇವ ಸ್ವಕರ್ಮ್ಮ             ॥೨೨.೭೯॥

 

ಈ ರೀತಿಯಾಗಿ ಮಾಡುವುದರಿಂದ ಅಂಥವರಿಗೆ ಆಗುತ್ತದೆ ಸದ್ಗತಿ,

ಎಲ್ಲಾ ದೈವದ್ದೇ ಎಂಬ ಕುಬುದ್ಧಿಯವರಿಗೆ ಕತ್ತಲ ನರಕವೇ ಗತಿ.

ಅದು ಜವಾಬ್ದಾರಿ ಇರದ ಸೋಮಾರಿಗಳ ಸರ್ವ ಕರ್ತೃತ್ವವಾದ,

ದೈವದಲ್ಲಿ ನಂಬಿಕೆ ಇರದ ತಮ್ಮ ಕೆಲಸ ಮಾಡದ ಪಲಾಯನವಾದ.

ಜೀವರಿಗೆ ಸ್ವವಿಹಿತ ಕರ್ಮವು ಇದ್ದೇ ಇದೆ ಎಂಬ ಮಾತದು ಸಿದ್ಧ.

 

ಜ್ಞಾತವ್ಯಂ ಚೈವಾಸ್ಯ ವಿಷ್ಣೋರ್ವಶತ್ವಂ ಕರ್ತ್ತವ್ಯಂ ಚೈವಾsತ್ಮನಃ ಕಾರ್ಯ್ಯಕರ್ಮ್ಮ ।

ಪ್ರತ್ಯಕ್ಷೈಷಾ ಕರ್ತ್ತೃತಾ ಜೀವಸಂಸ್ಥಾ ತಥಾSSಗಮಾದನುಮಾನಾಚ್ಚ ಸರ್ವಮ್ ॥೨೨.೮೦॥

ಇರಬೇಕು -ಜಗತ್ತೆಲ್ಲವೂ ಭಗವದಧೀನ ಎಂಬ ಜ್ಞಾನ,

ನಡೆದಿರಬೇಕು ಸ್ವವಿಹಿತ ಕರ್ತವ್ಯ ಪಾಲನೆಯ ಯಾನ.

ಜೀವನಲ್ಲಿರುವಂಥ ಕತೃತ್ವವು ಪ್ರತ್ಯಕ್ಷ ಗೋಚರ,

ಆಗಮ ಅನುಮಾನಗಳಿಂದದು ದೈವ ವ್ಯಾಪಾರ.

ಭಗವಂತನ ವಶವಾದ ಅದು ಅವನ ಸ್ವತಂತ್ರ ಕತೃತ್ವ,

ಜೀವನಿಗದು ದೈವದತ್ತವಾದದ್ದು ಎಂಬುದು ಸಿದ್ಧ ತತ್ವ.

 

ವಿಷ್ಣೋರ್ವಶೇ ತನ್ನ ಹೇಯಂ ದ್ವಯಂ ಚ ಜಾನನ್ ವಿದ್ವಾನ್ ಕುರುತೇ ಕಾರ್ಯ್ಯಕರ್ಮ್ಮ ।

ತತ್ಪ್ರೇರಕಂ ವಿಷ್ಣುಮೇವಾಭಿಜಾನನ್ ಭವೇತ್ ಪ್ರಮಾಣತ್ರಿತಯಾನುಗಾಮೀ ॥೨೨.೮೧॥

ದೈವದ ಕತೃತ್ವ ಮತ್ತು ಜೀವನ ಕತೃತ್ವ,

ಎರಡೂ ತಿರಸ್ಕರಿಸಲಾಗದಂಥ ತತ್ವ.

ಅವೆರಡೂ ಇರುವುದು ನಾರಾಯಣನ ವಶ,

ತಿಳಿದವನ ಕರ್ಮಕ್ಕಿರುತ್ತದೆ ಜ್ಞಾನದ ಪಾಶ.

ತನ್ನ ಪಾಲಿಗೆ ಬಂದ ಕರ್ಮವನ್ನು ಮಾಡುತ್ತಾನೆ,

ಭಗವಂತ ಪ್ರೇರಿಸಿದ್ದೇ ಎಂದು ಅನುಸರಿಸುತ್ತಾನೆ.

ಪ್ರತ್ಯಕ್ಷ, ಅನುಮಾನ, ಆಗಮಗಳು ಪ್ರಮಾಣ,

ಏನೇ ಸಿದ್ಧವಾಗಬೇಕಾದರೂ ಈ ಮೂರೇ ಹೂರಣ.

 

ಪೂರ್ಣ್ಣಂ ಪ್ರಮಾಣಂ ತತ್ತ್ರಯಂ ಚಾವಿರೋಧೇನೈಕತ್ರಸ್ಥಂ ತತ್ ತ್ರಯಂ ಚಾವಿರೋಧಿ ।

ಪೃಥಙ್ ಮದ್ಧ್ಯಂ ಚಾಪ್ರಮಾಣಂ ವಿರೋಧಿ ಸ್ಯಾತ್ ತತ್ ತಸ್ಮಾತ್ ತ್ರಯಮೇಕತ್ರ ಕಾರ್ಯ್ಯಮ್॥೨೨.೮೨॥

ವಿರೋಧವಿರದಂತೆ ಇರಬೇಕು ಮೂರೂ ಪ್ರಮಾಣ,

ಸಿದ್ಧವಾಗುವುದಿಲ್ಲ ಯಾವುದೂ ಇದ್ದರೆ ಬರೀ ಅನುಮಾನ.

ಇರಲು ಪ್ರತ್ಯಕ್ಷ ಆಗಮ ಅನುಮಾನಗಳ ಸಮನ್ವಯ,

ಗಟ್ಟಿ ಹಾಕುತ್ತದೆ ಒಳ್ಳೆಯ ಜೀವನದ ನಡೆಗೆ ಅಡಿಪಾಯ.

 [Contributed by Shri Govind Magal]

No comments:

Post a Comment

ಗೋ-ಕುಲ Go-Kula