Thursday 26 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 89-95

 

ತಸ್ಮಾತ್ ಕಾರ್ಯ್ಯಂ ತೇನ  ಕ್ಲ್ ಪ್ತಂ ಸ್ವಕರ್ಮ್ಮ ತತ್ ಪೂಜಾರ್ತ್ಥಂ ತೇನ ತತ್ಪ್ರಾಪ್ತಿರೇವ ।

ಅತೋSನ್ಯಥಾ ನಿರಯಃ ಸರ್ವಥಾ ಸ್ಯಾತ್ ಸ್ವಕರ್ಮ್ಮ ವಿಪ್ರಸ್ಯ ಜಪೋಪದೇಶೌ ॥೨೨.೮೯॥

 

ವಿಷ್ಣೋರ್ಮ್ಮುಖಾದ್ ವಿಪ್ರಜಾತಿಃ ಪ್ರವೃತ್ತಾ ಮುಖೋತ್ಥಿತಂ ಕರ್ಮ್ಮ ತೇನಾಸ್ಯ ಸೋSದಾತ್ ।

ಬಾಹ್ವೋರ್ಜ್ಜಾತಃ ಕ್ಷತ್ರಿಯಸ್ತೇನ ಬಾಹ್ವೋಃ ಕರ್ಮ್ಮಾಸ್ಯ ಪಾಪಪ್ರತಿವಾರಣಂ ಹಿ ॥೨೨.೯೦॥

ಭಗವಂತ ಯಾವಾಗಲೂ ಸರ್ವತಂತ್ರ ಸ್ವತಂತ್ರ,

ಜೀವಿಗಳದು ಅವನಧೀನವಾದ ಸೀಮಿತ ಸ್ವಾತಂತ್ರ್ಯ.

ಜೀವಯೋಗ್ಯತೆಯಂತೆ ಸ್ವಕರ್ಮ ಮಾಡುವುದು ಜೀವನ ಧರ್ಮ,

ಯೋಗ್ಯತೆಯಂತೆ ಪ್ರಯತ್ನ ದೇವಪೂಜೆಯಂತಿರಲಿ ಎಂಬ ಮರ್ಮ.

ಹಾಗೆ ಪ್ರಾಮಾಣಿಕವಾಗಿ ಮಾಡುವುದರಿಂದಲೇ ಜೀವಕ್ಕೆ ಬಿಡುಗಡೆ,

ಹಾಗೆ ಪ್ರಯತ್ನ ಮಾಡದಿದ್ದರೆ ಜೀವನ ಯಾನವು ಅದು ನರಕದ ಕಡೆ.

 

ಬ್ರಾಹ್ಮಣನ ಸ್ವಕರ್ಮ ಅಧ್ಯಯನ ಮತ್ತು ಅಧ್ಯಾಪನ,

ಆ ವರ್ಣದ ಜನನವು ವಿಷ್ಣುಮುಖದಿಂದಾದ ಕಾರಣ.

ಹಾಗಾಗಿ ಭಗವಂತ ಬ್ರಾಹ್ಮಣರಿಗೆ ಆ ಕರ್ಮವ ಕೊಟ್ಟ,

ಕ್ಷತ್ರಿಯ ತೋಳಿಂದ ಹುಟ್ಟಿದ್ದರಿಂದ ಪಾಪ ತಡೆಗೆ ಇಟ್ಟ.

 

ಪ್ರವರ್ತ್ತನಂ ಸಾಧುಧರ್ಮ್ಮಸ್ಯ ಚೈವ ಮುಖಸ್ಯ ಬಾಹ್ವೋಶ್ಚಾತಿಸಾಮೀಪ್ಯತೋSಸ್ಯ ।

ಜಪೋಪದೇಶೌ ಕ್ಷತ್ರಿಯಸ್ಯಾಪಿ ವಿಷ್ಣುಶ್ಚಕ್ರೇ ಧರ್ಮ್ಮೌ ಯಜ್ಞಕರ್ಮ್ಮಾಪಿ ವಿಪ್ರೇ ॥೨೨.೯೧॥

ಕ್ಷತ್ರಿಯರ ಕರ್ತವ್ಯವಾಗಿದೆ - ಧರ್ಮದ ಪ್ರವರ್ತನೆ,

ಕ್ಷತ್ರಿಯರೂ ಮಾಡಬೇಕು ಜಪೋಪದೇಶ-ಪಾಲನೆ.

ಮುಖ ಮತ್ತು ತೋಳುಗಳಿವೆ ಒಂದಕ್ಕೊಂದು ಬಲು ಸಮೀಪ,

ಯಜ್ಞ ವಿಪ್ರಗೆ;ಧರ್ಮಾಚರಣೆ ರಕ್ಷಣೆ ಕ್ಷತ್ರಿಯಗೆ ಎಂದವನ ಸಂಕಲ್ಪ.

 

ವೈಶ್ಯೋ ಯಸ್ಮಾದೂರುಜಸ್ತೇನ ತಸ್ಯ ಪ್ರಜಾವೃದ್ಧಿಸ್ತಜ್ಜಕರ್ಮ್ಮೈವ ಧರ್ಮ್ಮಃ ।

ತತ್ಸಾದೃಶ್ಯಾತ್ ಸ್ಥಾವರಾಣಾಂ ಚ ವೃದ್ಧಿಂ ಕರೋರೂರ್ವೋಃ ಸನ್ನಿಕೃಷ್ಟತ್ವಹೇತೋಃ ॥೨೨.೯೨॥

 

ವಾರ್ತ್ತಾತ್ಮಕಂ ಕರ್ಮ್ಮ ಧರ್ಮ್ಮಂ ಚಕಾರ ವಿಷ್ಣುಸ್ತಸ್ಯೈವಾಙ್ಘ್ರಿಜಃ ಶೂದ್ರ ಉಕ್ತಃ ।

ಗತಿಪ್ರಧಾನಂ ಕರ್ಮ್ಮ ಶುಶ್ರೂಷಣಾಖ್ಯಂ ಸಾದೃಶ್ಯತೋ ಹಸ್ತಪದೋಸ್ತಥೈವ ॥೨೨.೯೩॥

 

ಹಸ್ತೋದ್ಭವಂ ಕರ್ಮ್ಮ ತಸ್ಯಾಪಿ ಧರ್ಮ್ಮಃ ಸನ್ತಾನವೃದ್ಧಿಶ್ಚ ಸಮೀಪಗತ್ವಾತ್ । 

ಭುಜಾವುರೋ ಹೃದಯಂ ಯದ್ ಬಲಸ್ಯ ಜ್ಞಾನಸ್ಯ ಚ ಸ್ಥಾನಮತೋ ನೃಪಾಣಾಮ್ ॥೨೨.೯೪॥

 

ಬಲಂ ಜ್ಞಾನಂ ಚೋಭಯಂ ಧರ್ಮ್ಮ ಉಕ್ತಃ ಪಾಣೌ ಕೃತೀನಾಂ ಕೌಶಲಂ ಕೇವಲಂ ಹಿ ।

ತಸ್ಮಾತ್ ಪಾಣ್ಯೋರೂರುಪದೋರುಪಸ್ಥಿತೇರ್ವಿಟ್ಛೂದ್ರಕೌ ಕರ್ಮ್ಮಣಾಂ ಕೌಶಲೇತೌ ॥೨೨.೯೫॥

ವೈಶ್ಯರ ಜನನ ಭಗವಂತನ ತೊಡೆಯಿಂದಾದ ಕಾರಣದಿಂದ,

ಪ್ರಜಾಭಿವೃದ್ಧಿಗೆಂದೇ ತೋಟಗಾರಿಕೆಗೆ ಅವರ ನೇಮಿಸಿದ.

ಕೈಗಳು ಮತ್ತು ತೊಡೆಗಳು ಹತ್ತಿರವಿದ್ದು ತಾಗಿಕೊಂಡಿರುವುದರಿಂದ,

ಜೀವನ ನಿರ್ವಹಣೆಗನುಕೂಲವಾದ ವ್ಯಾಪಾರ ವಹಿವಾಟು ನೇಮಿಸಿದ.

ಶೂದ್ರನ ಜನನ ಭಗವಂತನ ಕಾಲಿನಿಂದ ಎಂದು ಪ್ರತೀತಿ,

ಕೈಯಿಂದಾಗುವ ಸೇವೆ ಸಂತಾನವೃದ್ಧಿ ಅವನದೆಂದು ನೀತಿ.

 

ಬಾಹುಗಳು ತೊಡೆಗಳು ಮತ್ತು ಹೃದಯ,

ಬಲ ಜ್ಞಾನ ಎಲ್ಲದಕ್ಕೂ ಅವುಗಳೇ ಆಶ್ರಯ.

ಕ್ಷತಿಯರಿಗೆ ಭುಜಗಳ ಸ್ಥಾನಮಾನ,

ರಕ್ಷಣಾಕಾರ್ಯವೇ ಅವರ ಜೀವನ.

ಎರಡೂ ತೋಳುಗಳ ಮಧ್ಯವಿದೆ ಹೃದಯ,

ಇದಾಗಿದೆ ಬಲಕ್ಕೂ ಜ್ಞಾನಕ್ಕೂ ತಾನು ಆಶ್ರಯ.

ಬಲ ಮತ್ತು ಜ್ಞಾನ ಕ್ಷತ್ರಿಯರಲ್ಲಿರಬೇಕಾದ ಗುಣ,

ಮುಖ್ಯ ಕ್ಷತಿಯ ಧರ್ಮವಾಗಿದೆ ಬಲ ಮತ್ತು ಜ್ಞಾನ.

ಜಾಣತನದ ಕೆಲಸಗಳು ಕೈಗಳಿಂದ ಆಗುವುದರಿಂದ,

ಕೈ ತೊಡೆ ಕಾಲುಗಳು ಒಂದಕ್ಕೊಂದು ಹತ್ತಿರವಿರುವುದರಿಂದ,

ವೈಶ್ಯ ಶೂದ್ರರಿಗೆ ಹಸ್ತಯೋಗ್ಯವಾದ ಕರ್ಮ,

ದೇವರೇ ಹೆಣೆದ ಸಮಾಜ ನಿರ್ವಹಣಾ ಧರ್ಮ.


 [Contributed by Shri Govind Magal]

No comments:

Post a Comment

ಗೋ-ಕುಲ Go-Kula