Friday 6 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 383-388

 

ಇತೀರಿತೋ ವಿನಿರ್ಭತ್ಸ್ಯ ಪುತ್ರಂ ದುಃಶಾಸನಂ ನೃಪಃ ।

ಅಮೋಚಯದ್ ವರೈಶ್ಚೈನಾಂ ಛನ್ದಯಾಮಾಸ ಪಾರ್ಷತೀಮ್   ॥೨೧.೩೮೩॥

ಇಷ್ಟೆಲ್ಲಾ ಕೇಳಿಸಿಕೊಂಡ ಧೃತರಾಷ್ಟ್ರ ಮಗ ದುಶ್ಯಾಸನನ್ನು ಚೆನ್ನಾಗಿ ಬೈಯ್ಯುತ್ತಾನೆ,

ದ್ರೌಪದಿಯ ಬಿಡುಗಡೆ ಮಾಡಿಸಿ ಅವಳಿಗೆ ವರವನ್ನು ಕೇಳಿಕೊಳ್ಳಲು ಹೇಳುತ್ತಾನೆ.

 

ಛನ್ದಿತಾ ಸಾ ವರೈಸ್ತೇನ ಧರ್ಮ್ಮೇ ಭಾಗವತೇ ಸ್ಥಿತಾ ।

ನೈವಾSತ್ಮನೋ ವರಾನ್ ವವ್ರೇ ವವ್ರೇ ತೇಷಾಂ ವಿಮೋಕ್ಷಣಮ್             ॥೨೧.೩೮೪॥

ವರವನ್ನು ಕೇಳಿಕೊಳ್ಳುವಂತೆ ಹೇಳಲ್ಪಟ್ಟಿದ್ದರೂ ದ್ರೌಪದಿ ಭಾಗವತಧರ್ಮ ನಿರತಳು,

ತನಗಾಗಿ ಏನನ್ನೂ ಬೇಡದೇ ತನ್ನ ಗಂಡಂದಿರ ಬಿಡುಗಡೆಯನ್ನಷ್ಟೇ ಕೇಳಿಕೊಂಡಳು.

 

ಯುಧಿಷ್ಠಿರಸ್ಯ ಸಭ್ರಾತುಃ ಸರಾಷ್ಟ್ರಸ್ಯ ವಿಮೋಕ್ಷಣಮ್ ।

ದದೌ ನೃಪೋSಸ್ಯಾ ನ ಪುನಶ್ಚನ್ದ್ಯಮಾನಾSಪಿ ಸಾsವೃಣೋತ್                         ॥೨೧.೩೮೫॥

ಯುಧಿಷ್ಠಿರ ಮತ್ತು ಅವನ ಸೋದರರ ಬಿಡುಗಡೆಗೊಳಿಸುತ್ತಾನೆ ಧೃತರಾಷ್ಟ್ರ ರಾಜ್ಯಸಮೇತ,

ಮತ್ತೆ ವರ ಕೇಳಿಕೋ ಎಂದು ಹೇಳಿದರೂ ಏನೂ ಬೇಡದ ದ್ರೌಪದಿ ಭಾಗವತಧರ್ಮ ನಿರತ.

 

[ದ್ರೌಪದಿ ಭಾಗವತ ಧರ್ಮದಲ್ಲಿ ಇದ್ದುದರಿಂದ ವರವನ್ನು ಕೇಳಲಿಲ್ಲ. ಈ ಭಾಗವತ ಧರ್ಮದ ಕುರಿತು ಹೇಳುತ್ತಾರೆ:]

ಭರ್ತ್ತುರ್ವಿಷ್ಣೋಶ್ಚ ನಾನ್ಯಸ್ಮಾದ್ ವರಸ್ವೀಕಾರ ಇಷ್ಯತೇ ।

ಏವಂ ಹಿ ಭಗವದ್ಧರ್ಮ್ಮಸ್ತಸ್ಮಾತ್ ಸಾ ನಾವೃಣೋತ್ ಪರಮ್             ॥೨೧.೩೮೬॥

ಹೆಣ್ಣಾದವಳು ಗಂಡನಿಂದ ಅಥವಾ ಭಗವಂತನಿಂದ ಪಡೆವುದಷ್ಟೇ ಧರ್ಮ,

ಆ ಕಾರಣದಿಂದಾಗಿಯೇ ಅವಳೇನೇನನ್ನೂ ಮತ್ತೆ ಬೇಡಿಕೊಳ್ಳದ ಮರ್ಮ.

 

[ಹಾಗಿದ್ದರೆ ಗಂಡಂದಿರ ವಿಮೋಕ್ಷವನ್ನೂ, ರಾಜ್ಯವನ್ನೂ ಪಡೆದಳಲ್ಲ, ಅದು ಭಾಗವತ ಧರ್ಮಕ್ಕೆ ಒಪ್ಪುತ್ತದೆಯೇ ಎಂದರೆ:]

ಅಧರ್ಮ್ಮತೋ ಹೃತತ್ವಾತ್ತು ತದ್ ದಾನಂ ನ ವರೋ ಭವೇತ್ ।

ಇತಿ ಮತ್ವಾ ಪಾಣ್ಡವಾನಾಂ ವವ್ರೇ ಕೃಷ್ಣಾ ವಿಮೋಕ್ಷಣಮ್                     ॥೨೧.೩೮೭॥

ಅಧರ್ಮದಿಂದ ಕಸಿದುಕೊಂಡದ್ದನ್ನು ಹಿಂದಿರುಗಿಸುವುದು ವರವೆಂದಾಗಲ್ಲ ಮಾನ್ಯ,

ಇದೆಲ್ಲವನ್ನೂ ಯೋಚಿಸಿಯೇ ದ್ರೌಪದಿ ಕೇಳಿಕೊಳ್ಳುವಳು ಪಾಂಡವರ ಬಿಡುಗಡೆಯನ್ನ.

 

[ಪ್ರಕಾರಾಂತರವಾಗಿಯೂ ಕೂಡಾ ಭಾಗವತ ಧರ್ಮಕ್ಕೆ ಹಾನಿಯಾಗಿಲ್ಲ ಏಕೆಂದರೆ: ]

 

ಶ್ವಶುರಾದೈಹಿಕವರಾಃ ಕ್ಷತ್ರಿಯಾಯಾಸ್ತ್ರಯೋ ಯತಃ ।

ಉಕ್ತಾಃ ಶತಂ ಚ ವಿಪ್ರಾಯಾ ಧರ್ಮ್ಮೇ ಭಾಗವತೇ ತತಃ ।

ಹೇತುನಾSನೇನ ವವ್ರೇ ಸಾ ನಾನ್ಯತ್ ಕಿಞ್ಚಿದತಃ ಪರಮ್                    ॥೨೧.೩೮೮॥

ಕ್ಷತ್ರಿಯ ಹೆಣ್ಣು ಮಾವನಿಂದ ಮೂರು ಐಹಿಕ ವರ ಕೇಳಲು ಅರ್ಹ,

ಬ್ರಾಹ್ಮಣ ಹೆಣ್ಣುಮಗಳಿಗೆ ಮಾವನಿಂದ ನೂರು ವರಗಳು ಗ್ರಾಹ್ಯ.

ಹೀಗೆ ಅವಳು ತನಗಾಗಿ ಏನನ್ನೂ ಪಡೆಯಲಿಲ್ಲ ಎಂಬುದು ಆಂತರ್ಯ.


 [Contributed by Shri Govind Magal]

No comments:

Post a Comment

ಗೋ-ಕುಲ Go-Kula