Thursday 12 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 12-18

 

ತಸ್ಮಿನ್ ಗತೇ ಭ್ರಾತೃವಿಯೋಗಕರ್ಶಿತಃ ಪಪಾತ ಭೂಮೌ ಸಹಸೈವ ರಾಜಾ ।

ಸಙ್ಜ್ಞಾಮವಾಪ್ಯಾSದಿಶದಾಶು ಸಞ್ಜಯಂ ಜೀವಾಮಿ ಚೇದಾಶು ಮಮಾSನಯಾನುಜಮ್ ॥೨೨.೧೨॥

ವಿದುರ ಹೊರಟಮೇಲೆ ಧೃತರಾಷ್ಟ್ರ ತಮ್ಮನ ವಿಯೋಗ ಸಂಕಟದಿಂದ ನೆಲಕ್ಕೆ ಒರಗಿದ,

ಮೂರ್ಛೆಯಿಂದೆದ್ದು ಸಂಜಯಗೆ ನನ್ನ ಬದುಕು ಬೇಕಾದರೆ ತಮ್ಮ ವಿದುರನ ಕರೆದು ತಾ ಎಂದ.

 

  ಇತೀರಿತಃ ಸಞ್ಜಯಃ ಪಾಣ್ಡವೇಯಾನ್ ಪ್ರಾಪ್ಯಾSನಯದ್ ವಿದುರಂ ಶೀಘ್ರಮೇವ ।

  ಸೋSಪ್ಯಾಗತಃ ಕ್ಷಿಪ್ರಮಪಾಸ್ತದೋಷೋ ಜ್ಯೇಷ್ಠಂ ವವನ್ದೇSಥ ಸ ಚೈನಮಾಶ್ಲಿಷತ್ ।

  ಅಙ್ಕಂ ಸಮಾರೋಪ್ಯ ಸ ಮೂರ್ಧ್ನಿ ಚೈನಮಾಘ್ರಾಯ ಲೇಭೇ ಪರಮಾಂ ಮುದಂ ತದಾ            ॥ ೨೨.೧೩॥

ಹೀಗೆ ಹೇಳಿಸಿಕೊಂಡ ಸಂಜಯ ಪಾಂಡವರಲ್ಲಿಗೆ ಹೋಗುತ್ತಾನೆ,

ಅತಿ ಶೀಘ್ರದಲ್ಲಿಯೇ ವಿದುರನನ್ನು ಅರಮನೆಗೆ ಕರೆದು ತರುತ್ತಾನೆ.

ವಿದುರನೂ ಅಪಕಾರ ಅವಮಾನ ಮರೆತು ಬಂದು ನಮಿಸಿದ,

ತಮ್ಮನ ತಬ್ಬಿ ತೊಡೆಮೇಲೆ ಕೂರಿಸಿಕೊಂಡು ನೆತ್ತಿ ಮೂಸಿ ಸುಖಿಸಿದ.

 

ಕ್ಷತ್ತಾರಮಾಯಾನ್ತಮುದೀಕ್ಷ್ಯ ಸರ್ವೇ ಸಸೌಬಲಾ ಧಾರ್ತ್ತರಾಷ್ಟ್ರಾ ಅಮರ್ಷಾತ್ ।

ಸಮ್ಮನ್ತ್ರ್ಯಹನ್ತುಂ ಪಾಣ್ಡವಾನಾಮುತೈಕಂ ಛನ್ನೋಪಧೇನೈವ ಸಸೂತಜಾ ಯಯುಃ  ॥ ೨೨.೧೪॥

ವಾಪಸಾದ ವಿದುರನ ಕಂಡು ದುರ್ಯೋಧನಾದಿಗಳಿಗೆ ಹೊಟ್ಟೆಕಿಚ್ಚು ಅಸಹನೆ,

ತಾವೆಲ್ಲ ಕೂತು ನಡೆಸುವರು ಪಾಂಡವರಲ್ಲಿ ಒಬ್ಬನ ಕೊಲ್ಲುವ ಮಂತ್ರಾಲೋಚನೆ.

ಕರ್ಣನೊಟ್ಟಿಗೆ ಕೌರವರು ಕಾಡಿಗೆ ಹೊರಟರು ನೆಚ್ಚಿಕೊಂಡು ದುರುದ್ದೇಶವನ್ನೇ.

 

ವಿಜ್ಞಾಯ ತೇಷಾಂ ಗಮನಂ ಸಮಸ್ತಲೋಕಾನ್ತರಾತ್ಮಾ ಪರಮೇಶ್ವರೇಶ್ವರಃ ।

ವ್ಯಾಸೋSಭಿಗಮ್ಯಾವದದಾಮ್ಬಿಕೇಯಂ ನಿವಾರಯಾSಶ್ವೇವ ಸುತಂ ತವೇತಿ ॥ ೨೨.೧೫॥

ತಿಳಿಯದಿರುವನೇ ದುರ್ಯೋಧನಾದಿಗಳ ತೆರಳುವಿಕೆ ಎಲ್ಲರ ಅಂತರ್ಯಾಮಿ,

ವೇದವ್ಯಾಸರು ಬಂದರಾಗ : ಬ್ರಹ್ಮ ರುದ್ರಾದಿ ದೇವತೆಗಳೆಲ್ಲರಿಗೂ ಮಹಾಸ್ವಾಮಿ.

ಧೃತರಾಷ್ಟ್ರನ ಕುರಿತು ವೇದವ್ಯಾಸರು, ನಿನ್ನ ಮಗನ ತಡೆಹಿಡಿ ಎಂದ್ಹೇಳಿದರು.

 

ಅವಾಪ್ಯ ಪಾರ್ತ್ಥಾನಯಮದ್ಯ ಮೃತ್ಯುಂ ಸಹಾನುಬನ್ಧೋ ಗಮಿತಾ ಹ್ಯಸಂಶಯಮ್ ।

ಇತೀರಿತೇ ತೇನ ನಿವಾರಯೇತಿ ಪ್ರೋಕ್ತೋ ಹರಿಃ ಪ್ರಾಹ ನ ಸಂವದೇ ತೈಃ ॥ ೨೨.೧೬॥

ಈ ದುರ್ಬುದ್ಧಿಯ ದುರ್ಯೋಧನ ಈಗ ಪಾಂಡವರಲ್ಲಿಗೆ ಹೋದರೆ,

ನಿಸ್ಸಂದೇಹವಾಗಿಯೂ ತಪ್ಪದವರಿಗೆಲ್ಲಾ ಜೀವ ಕಳೆದುಕೊಳ್ಳುವ ಬರೆ.

ಧೃತರಾಷ್ಟ್ರ ಹೇಳಿದ -ನೀವೇ ಅವರ ತಡೆಯಬಹುದಲ್ಲ,

ವ್ಯಾಸರು ಹೇಳುತ್ತಾರೆ -ನಾನವರೊಡನೆ ಮಾತನಾಡುವುದಿಲ್ಲ.

 

ಮೈತ್ರೇಯ ಆಯಾಸ್ಯತಿ ಸೋSಪಿ ವಾಚಂ ಶಿಕ್ಷಾರ್ತ್ಥಮೇತೇಷ್ವಭಿಧಾಸ್ಯತೀಹ ।

ತಾಂ ಚೇದ್ ಕರೋತ್ಯೇಷ ಸುತಸ್ತವಾಸ್ಯ ಭದ್ರಂ ತದಾ ಸ್ಯಾಚ್ಛಪ್ಸ್ಯತಿ ತ್ವನ್ಯಥಾ ಸಃ ॥ ೨೨.೧೭॥

ಮೈತ್ರೇಯ ಬಂದು ಅವನೂ ದುರ್ಯೋಧನಾದಿಗಳಿಗೆ ನೀತಿ ಉಪದೇಶಿಸುತ್ತಾನೆ,

ಪಾಲಿಸಿದರೆ ಒಳ್ಳೆಯದವರಿಗೆ : ಇಲ್ಲವಾದರೆ ಅವನು ಕೌರವರಿಗೆ ಶಪಿಸುತ್ತಾನೆ.

 

 ಉಕ್ತ್ವೇತಿ ರಾಜಾನಮನನ್ತಶಕ್ತಿರ್ವ್ಯಾಸೋ ಯಯೌ ತತ್ರಗತೇಷು ತೇಷು ।

ಸುಯೋಧನಾದ್ಯೇಷು ಹತೇಷು ಪಾರ್ತ್ಥೈರ್ಭೂಭಾರಹಾನಿರ್ನ್ನ ಭವೇದಿತಿ ಪ್ರಭುಃ ॥ ೨೨.೧೮॥

ಹೀಗೆ ಧೃತಾರಾಷ್ಟ್ರನಿಗೆ ಹೇಳಿದ ಅಸಮಾನ್ಯ ಬಲದ ವೇದವ್ಯಾಸರು ಹೊರಡುತ್ತಾರೆ,

ಕೌರವರು ಕಾಡಿಗೆ ಹೋಗಿ ಆಗಲೇ ಸತ್ತರೆ ಭೂಭಾರಹರಣ ಆಗದೆಂದು ಸೂಚಿಸುತ್ತಾರೆ.

 [Contributed by Shri Govind Magal]

No comments:

Post a Comment

ಗೋ-ಕುಲ Go-Kula