Thursday 5 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 241-248

 

ತತ್ರ ಸರ್ವಜಗದೇಕಸಙ್ಗಮೇ ತತ್ವನಿರ್ಣ್ಣಯಕಥಾ ಬಭೂವಿರೇ ।

ಪ್ರಾಶ್ನಿಕೋSತ್ರ ಪರಿಪೂರ್ಣ್ಣಚಿದ್ಧನೋ ವ್ಯಾಸ ಏವ ಭಗವಾನ್ ಬಭೂವ ಹ ॥೨೧.೨೪೧॥

ಲೋಕವೇ ಸೇರಿದ್ದ ಆ ಯಜ್ಞಸ್ಥಳದಲ್ಲಿ ತತ್ವದ ಚರ್ಚೆ ನಡೆದಿತ್ತು,

ಅರಿವೇ ಮೈವೆತ್ತಿ ಬಂದಿದ್ದ ವ್ಯಾಸರ ಮಾತೇ ನಿರ್ಣಾಯಕವಾಗಿತ್ತು.

 

ತತ್ವನಿರ್ಣ್ಣಯಕಥಾಸು ನಿರ್ಣ್ಣಯೋ ವಾಸುದೇವಗುಣವಿಸ್ತರೋSಭವತ್ ।

ನಾಸ್ತಿ ತತ್ಸದೃಶ ಉತ್ತಮಃ ಕುತಃ ಪಾರ ಏಷ ನ ತತೋSನ್ಯ ಇತ್ಯಪಿ ॥೨೧.೨೪೨॥

ಆ ತತ್ವ ಚರ್ಚೆಯಲ್ಲಿ ಆಯಿತು ವಾಸುದೇವನೇ ಸರ್ವಗುಣಪೂರ್ಣನೆಂಬ ನಿರ್ಣಯ,

ಅವಗೆ ಸಮರೇ ಇಲ್ಲವೆಂದಮೇಲೆ ಮಿಗಿಲಾದವ ಎಲ್ಲಿಂದ ಬಂದಾನೆಂಬ ಅಭಿಪ್ರಾಯ.

ಎಲ್ಲದಕ್ಕೂ ದಡದಂತೆ ಭಗವಂತನೇ ಆಶ್ರಯ,

ಅವನೇ ವಿಲಕ್ಷಣ ಸರ್ವೋತ್ತಮನೆಂಬ ನಿರ್ಣಯ.

 

ಬಾದರಾಯಣಭೃಗೂತ್ಥರಾಮಯೋಃ ಶೃಣ್ವತೋಃ ಪರಮನಿರ್ಣ್ಣಯೇ ಕೃತೇ ।

ಮೋದಮಾನಜನತಾಸಮಾಗಮೇSಪೃಚ್ಛದತ್ರ ನೃಪತಿರ್ಯ್ಯತವ್ರತಮ್             ॥೨೧.೨೪೩॥

ವೇದವ್ಯಾಸ ಪರಶುರಾಮರು ಕೇಳಿಸಿಕೊಳ್ಳುತ್ತಿದ್ದ ಸಮಯ,

ಮಂಡಿಸಲ್ಪಡುತ್ತಿತ್ತು ಉತ್ಕೃಷ್ಟವಾದ ತತ್ವಜ್ಞಾನ ನಿರ್ಣಯ.

ಅಲ್ಲಿತ್ತು ಸಂತಸದಿಂದಿದ್ದ ಎಲ್ಲಾ ಸಜ್ಜನರ ವೃಂದ,

ಆಗ ಧರ್ಮರಾಜ ಭೀಷ್ಮರನ್ನು ಪ್ರಶ್ನೆ ಮಾಡಿದ.

ಜಾನಮಾನೋSಪಿ ನೃಪತಿಃ ಸರ್ವಪೂಜ್ಯತಮಂ ಹರಿಮ್ ।

ಸಂಶಯಂ ಭೂಭೃತಾಂ ಭೇತ್ತುಂ ಭೀಷ್ಮಂ ಪಪ್ರಚ್ಛ ಧರ್ಮ್ಮವಿತ್             ॥೨೧.೨೪೪॥

ಧರ್ಮರಾಜಗೆ ಅರಿವಿತ್ತು ಶ್ರೀಕೃಷ್ಣ ಸರ್ವೋತ್ತಮ ನಾರಾಯಣನೆಂಬ ವಿಚಾರ,

ಭೀಷ್ಮರಿಗೆ ಪ್ರಶ್ನೆ ಮಾಡಿದ,ಮಾಡಲು ಅಲ್ಲಿ ನೆರೆದ ರಾಜರ ಸಂಶಯ ಪರಿಹಾರ.

 

ನಾಸ್ತಿ ನಾರಾಯಣಸಮಮಿತಿ ವಾದೇನ ನಿರ್ಣ್ಣಯೇ ।

ಕೃತೇ ಬ್ರಹ್ಮಾದಿಭಿರಪಿ ಕೃಷ್ಣಂ ಮರ್ತ್ತ್ಯಂ ಹಿ ಮೇನಿರೇ                 ॥೨೧.೨೪೫॥

 

ನೃಪಾಸ್ತಸ್ಮಾದಯಂ ಕೃಷ್ಣೋ ನಾರಾಯಣ ಇತಿ ಸ್ಮ ಹ ।

ಸಮ್ಯಗ್ ಜ್ಞಾಪಯಿತುಂ ಧರ್ಮ್ಮಸೂನುರ್ಭೀಷ್ಮಮಪೃಚ್ಛತ          ॥೨೧.೨೪೬॥

ನಾರಾಯಣಗೆ ಸಮರಿಲ್ಲವೆಂದು ಬ್ರಹ್ಮಾದಿಗಳಿಂದ ಸಿದ್ಧವಾಗಿತ್ತು,

ಜನರಲ್ಲಿ ಕೃಷ್ಣ ಮನುಷ್ಯ ಮಾತ್ರನೆಂಬ ಭಾವವದು ಮನೆ ಮಾಡಿತ್ತು.

ಶ್ರೀಕೃಷ್ಣನೇ ನಾರಾಯಣನೆಂದು ದೃಢಪಡಿಸಲೋಸುಗ,

ಧರ್ಮರಾಜ ಭೀಷ್ಮಾಚಾರ್ಯರನ್ನು ಪ್ರಶ್ನೆ ಮಾಡಿದನಾಗ.

 

[ಅಲ್ಲಿ ಬ್ರಹ್ಮಾದಿ ದೇವತೆಗಳು ನೆರೆದಿದ್ದರೂ ಕೂಡಾ ಧರ್ಮರಾಜ ಭೀಷ್ಮಾಚಾರ್ಯರನ್ನೇ ಏಕೆ ಪ್ರಶ್ನಿಸಿದ ಅಂದರೆ: ]

ಬ್ರಹ್ಮಾದಯಃ ಸುರಾ ಯಸ್ಮಾದ್ ದೃಶ್ಯನ್ತೇ ಮರ್ತ್ತ್ಯವನ್ನೃಭಿಃ ।

ನಚೈವಾತಿತರಾಭ್ಯಾಸೋ ನೃಣಾಮಸ್ತಿ ಮುನಿಷ್ವಪಿ                   ॥೨೧.೨೪೭॥

ಬ್ರಹ್ಮಾದಿ ದೇವತೆಗಳೂ ಸಾಮಾನ್ಯರಿಗೆ ಮನುಷ್ಯರಂತೆ ಕಾಣುತ್ತಿದ್ದರಿಂದ,

ಕಾಡಿನ ಋಷಿಗಳ ಅರಿವಿರದುದರಿಂದ ; ಬ್ರಹ್ಮಾದಿಗಳನ್ನು ಕೇಳದೇ ಉಳಿದ.

 

ಸರ್ವಶಾಸ್ತ್ರವಿದಂ ಭೀಷ್ಮಂ ಜಾನನ್ತ್ಯೇತೇ ನೃಪಾ ಅಪಿ ।

ತಸ್ಮಾದ್ ಭೀಷ್ಮಮಪೃಚ್ಛತ್ ಸ ಕುಲವೃದ್ಧತ್ವತಸ್ತಥಾ                  ॥೨೧.೨೪೮॥

ರಾಜರೆಲ್ಲಾ ಅರಿತಿದ್ದರು ಭೀಷ್ಮರನ್ನ,

ಗೊತ್ತಿತ್ತು ಭೀಷ್ಮರಲ್ಲಿದ್ದ ಶಾಸ್ತ್ರಜ್ಞಾನ,

ಕುಲಕ್ಕೆ ಹಿರಿಯರೆಂಬ ಸ್ಥಾನಮಾನ,

ಹಾಗಾಗಿ ಧರ್ಮರಾಜ ಕೇಳಿದ ಭೀಷ್ಮರನ್ನ.


[Contributed by Shri Govind Magal]

No comments:

Post a Comment

ಗೋ-ಕುಲ Go-Kula