Saturday 10 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 219-226

 

ನಿಹತ್ಯ ತೌ ಕೇಶವೋ ರೌಗ್ಮಿಣೇಯಂ ಪುನರ್ವೈದರ್ಭ್ಯಾಂ ಜನಯಾಮಾಸ ಸದ್ಯಃ ।

ಸ ಚೈಕಲವ್ಯೋ ರಾಮಜಿತಃ ಶಿವಾಯ ಚಕ್ರೇ ತಪೋSಜೇಯತಾಂ ಚಾSಪ ತಸ್ಮಾತ್ ॥೨೨.೨೧೯॥

ಶ್ರೀಕೃಷ್ಣ : ಪೌಂಡ್ರಕ ವಾಸುದೇವ ಮತ್ತು ಕಾಶೀರಾಜನನ್ನು ಸೋಲಿಸಿ ಕೊಂದ,

ಆನಂತರದಲ್ಲಿ ರುಗ್ಮಿಣಿಯಲ್ಲಿ ಮಗನಾದ ಪ್ರದ್ಯುಮ್ನನನ್ನು ಹುಟ್ಟಿಸಿದ.

ಇತ್ತ ಬಲರಾಮನಿಂದ ಸೋತುಹೋದ ನಂತರ ಏಕಲವ್ಯ,

ಶಿವನ ಕುರಿತು ತಪಸ್ಸಾಚರಿಸಿ ಪಡೆದ ಅಜೇಯತ್ವದ ವರ.

 

ಸ ಶರ್ವದತ್ತೇನ ವರೇಣ ದೃಪ್ತಃ ಪುನರ್ಯೋದ್ಧುಂ ಕೃಷ್ಣಮೇವಾSಸಸಾದ ।

ತಸ್ಯಾಸ್ತ್ರಶಸ್ತ್ರಾಣಿ ನಿವಾರ್ಯ್ಯ ಕೇಶವಶ್ಚಕ್ರೇಣ ಚಕ್ರೇ ತಮಪಾಸ್ತಕನ್ಧರಮ್             ॥೨೨.೨೨೦॥

ರುದ್ರ ಕೊಟ್ಟ ವರದಿಂದಲಾದ ಏಕಲವ್ಯ ದರ್ಪಿತ,

ಮತ್ತೆ ಯುದ್ಧ ಮಾಡೆಲೆಂದು ಬಂದ ಶ್ರೀಕೃಷ್ಣನತ್ತ.

ಶ್ರೀಕೃಷ್ಣ ಅವನ ಶಸ್ತ್ರಾಸ್ತ್ರಗಳ ನಿಗ್ರಹಿಸಿದ,

ಚಕ್ರದಿಂದ ಮಾಡಿದ ಏಕಲವ್ಯನ ಶಿರಚ್ಛೇದ.

 

ಸ ಚಾSಪ ಪಾಪಸ್ತಮ ಏವ ಘೋರಂ ಕೃಷ್ಣದ್ವೇಷಾನ್ನಿತ್ಯದುಃಖಾತ್ಮಕಂ ತತ್ ।

ಏವಂ ಯದೂನಾಮೃಷಭೇಣ ಸೂದಿತೇ ಪೌಣ್ಡ್ರೇ ತಥಾ ಕಾಶಿನೃಪೇ ಚ ಪಾಪೇ             ॥೨೨.೨೨೧॥

 

ಕಾಶೀಶಪುತ್ರಸ್ತು ಸುದಕ್ಷಿಣಾಖ್ಯಸ್ತಪೋSಚರಚ್ಛಙ್ಕರಾಯೋರುಭಕ್ತ್ಯಾ ।

ಪ್ರತ್ಯಕ್ಷಗಂ ತಂ ಶಿವಂ ಪಾಪಬುದ್ಧಿಃ ಕೃಷ್ಣಾಭಾವಂ ಯಾಚತೇ ದುಷ್ಟಚೇತಾಃ             ॥೨೨.೨೨೨॥

ದುಷ್ಟ ಏಕಲವ್ಯನದು ಕೃಷ್ಣನನ್ನು ದ್ವೇಷಿಸಿದ ಪಾಪಿಷ್ಠ ಮನಸ್ಸು,

ಅದರ ಫಲವಾಗಿ ಹೊಂದಿದ ನಿತ್ಯ ದುಃಖವಾದ ಅಂಧಂತಮಸ್ಸು.

ಈ ರೀತಿಯಲ್ಲಿ ಯಾದವಶ್ರೇಷ್ಠನಾದ ಶ್ರೀಕೃಷ್ಣ,

ಪೌಂಡ್ರಕ, ಪಾಪಿಷ್ಠ ಕಾಶೀರಾಜಗಿತ್ತ ಮರಣ.

ಶಿವನ ಕುರಿತು ಭಾರೀ ತಪಸ್ಸು ಮಾಡಿದ್ದ ಕಾಶೀರಾಜನ ಮಗ ಸುದಕ್ಷಿಣ,

ಪ್ರತ್ಯಕ್ಷನಾದ ಶಿವನಲ್ಲಿ ಪಾಪಿ ಕೇಳಿದ್ದು : ನಾಶವಾಗಬೇಕೆಂದು ಶ್ರೀಕೃಷ್ಣ.

 

ಕೃತ್ಯಾಮಸ್ಮೈ ದಕ್ಷಿಣಾಗ್ನೌ ಶಿವೋSಪಿ ದೈತ್ಯಾವೇಶಾದದದಾದಾವೃತಾತ್ಮಾ ।

ಸ ದಕ್ಷಿಣಾಗ್ನಿಶ್ಚಾಸುರಾವೇಶಯುಕ್ತಃ ಸಮ್ಪೂಜಿತಃ ಕಾಶಿರಾಜಾತ್ಮಜೇನ             ॥೨೨.೨೨೩॥

 

ವರಾದುಮೇಶಸ್ಯ ವಿವೃದ್ಧಶಕ್ತಿರ್ಯ್ಯಯೌ ಕೃಷ್ಣೋ ಯತ್ರ ಸಮ್ಪೂರ್ಣ್ಣಶಕ್ತಿಃ ।

ಕೃಷ್ಣಸ್ತಸ್ಯ ಪ್ರತಿಘಾತಾರ್ತ್ಥಮುಗ್ರಂ ಸಮಾದಿಶಚ್ಛಕ್ರಮನನ್ತವೀರ್ಯ್ಯಃ             ॥೨೨.೨೨೪॥

ಸುದಕ್ಷಿಣಗೆ ವರವಿತ್ತ ಶಿವನೊಳಗಾಗಿಬಿಟ್ಟಿದ್ದ  ದೈತ್ಯಾವೇಶ,

ಆಗಲೇ ದಕ್ಷಿಣಾಗ್ನಿಯ ಕೃತ್ಯಾದೇವತೆಯನ್ನು ಕೊಟ್ಟ ವಿಶೇಷ.

ಕೃತ್ಯಾದೇವತೆ ದಕ್ಷಿಣಾಗ್ನಿಗೆ ಅಭಿಮಾನಿ ಆಗಿದ್ದ,

ಅಸುರಾವೇಶದಿಂದ ಕೃಷ್ಣನ ಕೊಲ್ಲಲು ಬಂದಿದ್ದ.

ಸದಾಶಿವನ ವರಬಲದ ಆ ಕೃತ್ಯಾಗ್ನಿಯು ಆಗ,

ಅರಸಿಕೊಂಡು ಹೊರಟಿತು ಕೃಷ್ಣನಿದ್ದ ಜಾಗ.

ಶ್ರೀಕೃಷ್ಣನು ಬಯಸಿ ಅದರ ನಾಶ,

ಸುದರ್ಶನ ಚಕ್ರಕ್ಕೆ ಕೊಟ್ಟ ಆದೇಶ.

 

ಜಾಜ್ವಲ್ಯಮಾನಂ ತದಮೋಘವೀರ್ಯ್ಯಂ ವ್ಯದ್ರಾವಯದ್ ವಹ್ನಿಮಿಮಂ ಸುದೂರಮ್ ।

ಕೃತ್ಯಾತ್ಮಕೋ ವಹ್ನಿರಸೌ ಪ್ರಧಾನವಹ್ನೇಃ ಪುತ್ರಶ್ಚಕ್ರವಿದ್ರಾವಿತೋSಥ ॥೨೨.೨೨೫॥

 

ಸಹಾನುಬನ್ಧಂ ಚ ಸುದಕ್ಷಿಣಂ ತಂ ಭಸ್ಮೀಚಕಾರಾSಶು ಸಪುತ್ರಭಾರ್ಯ್ಯಮ್ ।

ದಗ್ಧ್ವಾ ಪುರೀಂ ವಾರಣಸೀಂ ಸುದರ್ಶನಃ ಪುನಃ ಪಾರ್ಶ್ವಂ ವಾಸುದೇವಸ್ಯ ಚಾSಗಾತ್

ಸುದಕ್ಷಿಣೋSಸೌ ತಮ ಏವ ಜಗ್ಮಿವಾನ್ ಕೃಷ್ಣದ್ವೇಷಾತ್ ಸಾನುಬನ್ಧಃ ಸುಪಾಪಃ ॥೨೨.೨೨೬॥

ಪ್ರಜ್ವಲಿಪ ವ್ಯರ್ಥವಾಗದಂಥ ಪೌರುಷದ ಸುದರ್ಶನ,

ದಕ್ಷಿಣಾಗ್ನಿಗೆ ಮಾಡಿಸಿತು ಬಲುದೂರಕ್ಕೆ ಪಲಾಯನ.

ಆ ಕೃತ್ಯಾಗ್ನಿಯಾಗಿದ್ದ ಪ್ರಧಾನಾಗ್ನಿಯ ಒಬ್ಬ ಪುತ್ರ,

ಅವನಿಗೊದಗಿತ್ತು ಕೃಷ್ಣನಾಶ ಮಾಡುವ ಪಾತ್ರ.

ಸುದರ್ಶನ ಚಕ್ರ ಆ ಕೃತ್ಯಾಗ್ನಿಯ ಬೆನ್ನಟ್ಟಿತ್ತು,

ಸುದಕ್ಷಿಣನನ್ನು ಸಂಸಾರಸಮೇತ ಸುಟ್ಟುಹಾಕಿತ್ತು.

ಕೃತ್ಯಾಗ್ನಿಯನ್ನು ಬೆನ್ನಟ್ಟಿ ಬಂದಿದ್ದ ಸುದರ್ಶನ ಚಕ್ರ,

ವಾರಣಾಸಿಯ ಸುಟ್ಟು ಮರಳಿತ್ತು ಕೃಷ್ಣನ ಹತ್ತಿರ.

ಈರೀತಿಯಾಗಿ ಭಗವದ್ವೇಷಿಯಾದ ಸುದಕ್ಷಿಣ ತಾನು,

ಬಂಧು ಬಾಂಧವರೊಡನೆ ಅಂಧಂತಮಸ್ಸು ಸೇರಿದನು.

No comments:

Post a Comment

ಗೋ-ಕುಲ Go-Kula