Saturday 10 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 294-299

 

ತದ್ರೂಪವೃದ್ಧಿಂ ಭೀಮಸೇನೋsಥ ದೃಷ್ಟ್ವಾ ಶ್ರುತ್ವಾ ಹನೂಮನ್ಮುಖತಃ ಕಥಾಶ್ಚ ।

ರಾಮಸ್ಯ ತಚ್ಚಾತುರಾತ್ಮ್ಯಂ ಚ ದಿವ್ಯಂ ಚಾತುರ್ಯ್ಯುಗಂ ಧರ್ಮ್ಮಮಪ್ಯಗ್ರ್ಯಮೇವ ॥೨೨.೨೯೪॥

 

ದ್ವಜಾದ್ ಬೀಭತ್ಸೋರ್ಗ್ಗರ್ಜ್ಜನೇನೈವ ಶತ್ರುಪರಾಭವೇ ತೇನ ದತ್ತೇsರ್ಜ್ಜುನಸ್ಯ ।

ಯಯೌ ಪ್ರಣಮ್ಯೈನಮಾಶ್ವೇವ ಭೀಮಃ ಸೌಗನ್ಧಿಕಂ ವನಮತ್ಯಗ್ರ್ಯರೂಪಮ್ ॥೨೨.೨೯೫॥

ಭೀಮಸೇನ ಹನುಮಂತನ ಆಕಾರವೃದ್ಧಿಯನ್ನು ಕಣ್ಣಾರೆ ಕಂಡ,

ಹನುಮಂತ ಹೇಳಿದ ರಾಮಾಯಣದ ಕಥೆಗಳ ಕೇಳಿ ಮನಗಂಡ.

ಶ್ರೀರಾಮಚಂದ್ರನ ನಾಲ್ಕು ಯುಗಗಳಲ್ಲಿನ ನಿಯಾಮಕತ್ವ,

ಚತುರ್ಯುಗ ವಿಹಿತವಾದ ಭಗವದ್ಧರ್ಮದ ಆ ಅಲೌಕಿಕತ್ವ.

ಕೇಳಿಸಿಕೊಂಡ ಭೀಮನಿಗೆ ಹನುಮಂತನಿಂದ ಅರ್ಜುನನ ಧ್ವಜದಲ್ಲಿ ನಿಲ್ಲುವ ವರ,

ಹುಂಕಾರದಿಂದಲೇ ಶತ್ರುಗಳ ಸೋಲಿಸುವ ವರ ಪಡೆದ ಭೀಮನಾದ ವಾಯುಕುಮಾರ.

ಭೀಮಸೇನ ಸಲ್ಲಿಸಿದ ಹನುಮಂತಗೆ ನಮಸ್ಕಾರ,

ಶ್ರೇಷ್ಠ ಸೌಗಂಧಿಕ ವನಕ್ಕೆ ಹೊರಟ ಕಾಡಿನ ದ್ವಾರ.

 

ನರಾಗಮ್ಯಾಂ ನಳಿನೀಮೇತ್ಯ ತತ್ರ ದೃಷ್ಟ್ವಾ ಪದ್ಮಾನ್ಯದ್ಭುತಾಕಾರವನ್ತಿ ।

ಹೈಮಾನಿ ದಿವ್ಯಾನ್ಯತಿಗನ್ಧವನ್ತಿ ಸಮಾಸದದ್ ವಾರ್ಯ್ಯಮಾಣೋ ನರಾಶೈಃ ॥೨೨.೨೯೬॥

ಮನುಷ್ಯಮಾತ್ರರು ಹೋಗಲಾಗದಂಥ ಆ ದಿವ್ಯ ಸರೋವರ,

ಆಗಿತ್ತದು ಅಲೌಕಿಕ ಸುಗಂಧಿತ ಸ್ವರ್ಣಸದೃಶ ತಾವರೆಗಳಾಗರ.

ಆಗ ಬಂತು ಭೀಮಸೇನಗೆ ರಾಕ್ಷಸರಿಂದ ತಡೆ,

ಆದರೂ ಸರೋವರಕ್ಕಿಳಿದ ಭೀಮಗ್ಯಾರು ಎಡೆ.

 

ತೇ ಭೀಮಮಾತ್ತಾಯುಧಮುಗ್ರರೂಪಂ ಮಹಾಬಲಂ ರೂಪನವಾವತಾರಮ್ ।

ನ್ಯವಾರಯನ್ ಕ್ರೋಧವಶಾಃ ಸಮೇತಾಃ ಶತಂ ಸಹಸ್ರಾಣ್ಯಜಿತಾನಿ ಸಙ್ಖೇ ॥೨೨.೨೯೭॥

ಲಕ್ಷ ಲಕ್ಷ ಸಂಖ್ಯೆಯ ಸೋಲರಿಯದ ಕ್ರೋಧಾಧೀನರ ಪಡೆ,

ಬಲಿಷ್ಠ ಚೆಲುವನಾದ ಆಯುಧಪಾಣಿ ಭೀಮಗೊಡ್ಡಿತು ತಡೆ.

 

ವರಾಚ್ಛಿವಸ್ಯೈವ ಪರೈರಜೇಯಾಃ ಶಸ್ತ್ರಾಸ್ತ್ರವೃಷ್ಟಿಂ ಮುಮುಚುಃ ಸುಭೀಮಾಮ್ ।

ಭೀಮೇsಖಿಲಜ್ಞೇ ತಪಸಾಂ ನಿಧಾನೇ ಬಲೋದಧೌ ಶೈವಶಾಸ್ತ್ರಂ ವದನ್ತಃ ॥೨೨.೨೯೮॥

 ಶಿವನ ವರಬಲದಿಂದ ಅಜೇಯರಾದ ಕ್ರೋಧಾಧೀನ ದೈತ್ಯರ ಸಮೂಹ,

ತಪಸ್ಸಿನ ಖನಿ ಬಲದ ಗಣಿ ಸರ್ವಜ್ಞ ಭೀಮನ ಮೇಲೆ ಮಾಡಿತ್ತು ಶಸ್ತ್ರಾಸ್ತ್ರ ಪ್ರವಾಹ.

 

ತಾನ್ ವೈಷ್ಣವೈರೇವ ಶಾಸ್ತ್ರೈಃ ಸ ಭೀಮೋ ವಿಜಿತ್ಯ ಪೂರ್ವಂ ವಾಙ್ಮಯೇ ಸಙ್ಗರೇ ತು ।

ಶಸ್ತ್ರಾಸ್ತ್ರವರ್ಷಸ್ಯ ಕುರ್ವನ್ ಪ್ರತೀಪಂ ಜಘ್ನೇsಖಿಲಾನ್ ಗದಯಾ ತೇಷು ವೀರಾನ್ ॥೨೨.೨೯೯॥

ಭೀಮ ಮೊದಲವರನ್ನು ವಿಷ್ಣುಶಾಸ್ತ್ರದ ವಾಙ್ಮಯ ಯುದ್ಧದಲ್ಲಿ ಸೋಲಿಸಿದ,

ಶಸ್ತ್ರದೊಂದಿಗೆ ಎದುರಾದ ದೈತ್ಯರೆಲ್ಲರನ್ನೂ ತನ್ನ ಗದೆಯಿಂದ ಸಂಹರಿಸಿದ.

No comments:

Post a Comment

ಗೋ-ಕುಲ Go-Kula