Sunday 11 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 433-437

 

ಉಮಯಾ ನಿರ್ಮ್ಮಿತಾತ್ಮಾರ್ದ್ದಮುತ್ತರಂ ಹರನಿರ್ಮ್ಮಿತಮ್ ।

ಜ್ಞಾತ್ವೈವಾವದ್ಧ್ಯತಾಂ ಚೈವ ರಾಜ್ಯೇ ಬುದ್ಧಿಂ ಚಕಾರ ಸಃ ॥೨೨.೪೩೩॥

 

ನೋವಾಚ ಕಸ್ಯಚಿತ್ ತೇಷು ಸ್ವಾನುಭೂತಂ ಸುಯೋಧನಃ ।

ಪ್ರಭಾತಾಯಾಂ ತು ಶರ್ವರ್ಯ್ಯಾಂ ಪುನಃ ಕರ್ಣ್ಣೋ ವಚೋSಬ್ರವೀತ್ ॥೨೨.೪೩೪॥

ದುರ್ಯೋಧನ ತನ್ನರ್ಧ ದೇಹ ಪಾರ್ವತಿಯಿಂದ ನಿರ್ಮಿತ,

ಇನ್ನರ್ಧ ದೇಹ ಶಿವನಿಂದ ನಿರ್ಮಿತ ಎಂದು ತಾನರಿತ.

ತಿಳಿದ - ತನ್ನ ವಜ್ರಮಯ ದೇಹವು ಅದು ಪರಮ ಶಾಶ್ವತ,

ತನ್ನ ಅವಧ್ಯತ್ವವರಿತು ಹೊಂದಿದ ರಾಜ್ಯಭಾರದ ನಿಷ್ಠೆ ನಿಶ್ಚಿತ.

ರಾತ್ರಿ ನಡೆದ ಘಟನೆ ತನಗಾದ ಅನುಭವ,

ಯಾರಲ್ಲೂ ಹೇಳದೇ ಮೌನ ವಹಿಸಿದನವ.

ಮರುಬೆಳಿಗ್ಗೆ ದುರ್ಯೋಧನಗೆ ಕರ್ಣ ಹೇಳುವ.

 

ಭೃತ್ಯೈಸ್ತವೈವ ಪಾರ್ತ್ಥೈರ್ಯ್ಯನ್ಮೋಚಿತೋSಸಿ ಪರನ್ತಪ ।

ತೇನ ಮಾನ್ಯೋSಧಿಕಂ ಲೋಕೇ ಯದ್ ಭೃತ್ಯಾ ಏವ ತಾದೃಶಾಃ ।

ಕಿಮು ತ್ವಂ ರಾಜಶಾರ್ದ್ದೂಲ ತದುತ್ತಿಷ್ಠ ಸ್ಥಿರೋ ಭವ ॥೨೨.೪೩೫॥

ಅರಿಭಯಂಕರನೇ, ನಿನ್ನ ದಾಸರಿಂದಾಗಿರುವ ನಿನ್ನ ಬಿಡುಗಡೆಯಾಗಿದೆ ಮಾನ್ಯ,

ದಾಸರಷ್ಟು ಬಲಿಷ್ಠರಾಗಿರುವಾಗ ನೀನು ಬಲಾಢ್ಯ ಎಂಬುವುದು ಸರ್ವಮಾನ್ಯ.

ಆದ್ದರಿಂದ ಮಹಾರಾಜಾ ಮೇಲೇಳು,

ನಿನ್ನ ಕಾರ್ಯದಲ್ಲಿ ಸುಸ್ಥಿರವಾಗಿ ನಿಲ್ಲು.

 

ಯಾ ಚ ತೇSರ್ಜ್ಜುನಮಾಹಾತ್ಮ್ಯೇ ಶಙ್ಕಾ ಸಾ ವ್ಯೈತು ಮೇ ಶೃಣು ।

ಯಾವನ್ನೈವಾರ್ಜ್ಜುನಂ ಹನ್ಯಾಂ ಪಾದೌ ಪ್ರಕ್ಷಾಳಯೇ ಸ್ವಯಮ್ ॥೨೨.೪೩೬॥

ನಿನ್ನಲ್ಲಿನ ಅರ್ಜುನನ ಬಲದ ಭೀತಿ ಮತ್ತು ಅನುಮಾನ ನಾಶವಾಗಲಿ ಕುರುನಾಥ,

ಅರ್ಜುನನ ಕೊಲ್ಲುವವರೆಗೂ ನನ್ನ ಕಾಲುಗಳ ನಾನೇ ತೊಳೆದುಕೊಳ್ಳುವುದೆನ್ನ ಶಪಥ.

 

ಇತ್ಯುಕ್ತೋSವರಜೈಶ್ಚೈವ ಸರ್ವೈಃ ಶಕುನಿನಾ ತಥಾ ।

ಯಾಚಿತೋ ರಥಮಾರು‌ಹ್ಯ ಯಯೌ ನಾಗಪುರಂ ದ್ರುತಮ್ ॥೨೨.೪೩೭॥

ಹೀಗೆ ದುಶ್ಯಾಸನಾದಿಗಳು ಮತ್ತು ಶಕುನಿಯಿಂದ ಬಂದ ಹೇಳಿಕೆ ಮತ್ತು ಬೇಡಿಕೆ,

ದುರ್ಯೋಧನನನ್ನು ಸಂತೈಸಿ ಹೊರಡಲು ಅನುವು ಮಾಡಿತು ಹಸ್ತಿನಪುರಕ್ಕೆ.

No comments:

Post a Comment

ಗೋ-ಕುಲ Go-Kula